ಬಸವಣ್ಣ

ಹೃದಯ ಕಾಡಿನಲಿಹ ಹುಲಿಯ ನಾಡಿ ಮಿಡಿಸುತಲಿ
ಅಂತರಂಗದ ವೀಣೆ ನುಡಿಸ ಬಾ ಬಸವಣ್ಣ
ಕಾಡು ಈ ದೇಹದಲಿ ನಾಡ ಮೂಡಿಸುತ ತೀಡುತಲಿ
ಬೀಡು ಮಾಡ ಬಾ ಬೇಗ ಓ ನಮ್ಮೆಲ್ಲರಣ್ಣ !

ಹುಲಿತನದ ಛಲವಿದ್ದು ಇಲಿಯಾಗಿ ಇದ್ದಿಹೆವು
ಭಯದಿ ಮರೆತಿಹೆವು ನೈಜ ತೇಜವನ್ನು
ಮಿನುಗು ಮೆರಗಿನ ವರ್ಣ ವೈಚಿತ್ರ್ಯ ಮಾಯಪಾಶವು
ಗುಡುಗಿ ಘರ್ಜಿಸುತಿದೆ; ಬದುಕಲಾರೆವಿನ್ನು

ನಿನ್ನ ಸಾತ್ವಿಕತೆಯ ಓಜಸ್ಸು ಹೊಮ್ಮಿ ತೇಜಸ್ಸು ಮೂಡಿ
ಮುಗಿಲಿನಾಚೆಯ ರವಿಯು ಮುಂದಾದನು
ಹಿಂದೊಮ್ಮೆ ನಿನ್ನ ವಚನ ವೃಷ್ಟಿ ನಮ್ಮೊಡಲ ಕೂಡಿ
ಓಡಿಸಿತು ಕವಿದ ಕಾರ್ಮೋಡಗಳನು

ದಿವ್ಯ ಜ್ಯೋತಿಯ ಹೊಲವು ಶರಣ ಛಲವು
ಸತ್ವ ಸಾತ್ವಿಕತೆಯ ನಾಂದಿ ಬಲದ ಮಂದಿರ ಭೇರಿ
ಮುಗಿಲು ಇಲ್ಲದ ಗಗನ ತಿಂಗಳನ ಇರವು
ಮಾಯೆ ಹೊದ್ದದ ಮನವು ವಿಶ್ವಾತ್ಮಿ ಪರಮಾತ್ಮನಕೇರಿ

ಶರಣ ಚರಣದ ವರ್ಣ ಬಸವಣ್ಣ ಹೇಳಿ
ಭವವೇಶ ಪಾಶವನು ನಾಶಮಾಡೆಮ್ಮ ತಂದನಿಲ್ಲಿ
ಸವಿ ತಿರುಳ ವಿಷ ಒಡಲ ವೈಚಿತ್ರ ಹೇಳಿ
ನೈಜ ಜ್ಯೋತಿಯನಿತ್ತು ಬಾ ಇತ್ತ ಎಂದು ಕರೆದನಲ್ಲಿ

ಕಿರಿ ಹೃದಯ ಕಲ್ಮಿಷ ಘೋರ ಗವಿಯಲಿ
ನುಸುಳಿ ಬಂದೆಮ್ಮ ಕಿವಿಯೊಳುಸುರಿದ ವಚನವ
ಬಲ ಬಂಧನ ವ್ಯೂಹ ಝಾಡ್ಯದಲಿ
ಮೌಢ್ಯತೆಯ ಮುರಿದೊತ್ತಿ ಎತ್ತುವನೆನ್ನ ಬಸವ

ಹಗಲು ಶಖೆಯಾಗಿ ಇರುಳು ಭಯವಾಗಿ
ಮಾಗದಾ ಘಾಯ ಮಾಡಿಹುದು ಕಾಯಕಾಮಾಯ
ಮದ್ದು ಇನ್ನೆಲ್ಲಿ ? ಓ ಕಾಣದಾ ಯೋಗಿ
ಇಹುದು ಬಾರಲ್ಲಿ; ಬಸವ ನುಡಿಯಲ್ಲಿ ನೈಜ ಧೈಯ !

ಚುಕ್ಕೆ ಲತೆಯಾಗಿ, ರವಿಯ ಫಲವಾಗಿ
ಹೂವು ಚಂದಿರನಾಗಿ, ನೆಲನೀರು ಶಾಮ ಮುಗಿಲಾಗಿ
ಮಿನುಗು ಮರುಗು ಜೀವನವು ಮಿಂಚಾಗಿ
ಹೊಂಚಿ ಸಿಡಿಲನು ಹೊಡೆಯುವದದೋ ಮಾಯ ಕೂಗಿ

ರೇಗಿ ಎದ್ದಿಹ ರುಚಿಗೆ ನೀಗಿ ಬಿದ್ದಿದೆ ಶಕ್ತಿ
ಬಲವಾಗು ಬಾ ಮೊದಲು ಹೃದಯ ಹದವಾಗಿ ಮಾಡು
ಜನ್ಮ ಸಾರ್ಥಕತೆಯ ನೈಜ ಮುಕ್ತಿ
ಆ ಮಾರ್ಗ ಬಸವಣ್ಣ ನುಡಿದ ವಚನ ನೋಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುನಾವಣೆ
Next post ಬಿರಿಯಾನಿ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys